ನವದೆಹಲಿ: ಆಡಳಿತರೂಢ ಪಿಡಿಪಿ-ಬಿಜೆಪಿ ಸರ್ಕಾರ ನನ್ನ ವಿರುದ್ಧ ಬೇಹುಗಾರಿಕೆ ನಡೆಸುತ್ತಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಸರ್ಕಾರ ಏನು ಕೇಳಲು ಇಚ್ಛಿಸುತ್ತಿದೆಯೋ ಅದನ್ನು ನೇರವಾಗಿಯೇ ಕೇಳಲಿ ಎಂದು ಟ್ವೀಟ್ ಮಾಡಿದ್ದರು.
ನನ್ನನ್ನು ಸಂದರ್ಶನ ಮಾಡಲು ಬಂದ ಪತ್ರಕರ್ತರೊಬ್ಬರನ್ನು ಗೇಟ್ ಹೊರಗಡೆಯೇ ಸಿಐಡಿ ಸಿಬ್ಬಂದಿ ತಡೆಯೊಡ್ಡಿದ್ದರು ಎಂದು ಒಮರ್ ಹೇಳಿಕೊಂಡಿದ್ದಾರೆ.
ಮುಫ್ತಿ ಸಾಹೇಬರೇ, ನೀವು ಮತ್ತು ನಿಮ್ಮ ಗೂಡಚರರು ನನ್ನ ಬಗ್ಗೆ ತಿಳಿದುಕೊಳ್ಳಬೇಕಾದರೆ ನೇರವಾಗಿ ಫೋನ್ ಮೂಲಕ ಕೇಳಿ. ದಯವಿಟ್ಟು ನನ್ನನ್ನು ಭೇಟಿಯಾಗಲು ಬಂದವರನ್ನು ಗೇಟ್ ಹೊರಗೆ ನಿಲ್ಲಿಸಬೇಡಿ ಎಂದು ಒಮರ್ ಟ್ವೀಟ್ ಮಾಡಿದ್ದಾರೆ.