ನವದೆಹಲಿ: ಮಾಲೇಗಾಂವ್ ಸ್ಫೋಟ ಪ್ರಕರಣದ ವಿಶೇಷ ಸರ್ಕಾರಿ ವಕೀಲರನ್ನು ತೆಗೆದುಹಾಕುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೇ ಹಿಂದೆ ಸರಿದಿದ್ದಾರೆ.
ತಾವು ಈ ಹಿಂದೆ ಇದೇ ಪ್ರಕರಣದ ಕೆಲವು ಆರೋಪಿಗಳನ್ನು ಪ್ರತಿನಿಧಿಸಿದ್ದ ಕಾರಣ ಈ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ನ್ಯಾ.ಯು.ಯು.ಲಲಿತ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, `ಹಾಗಾದರೆ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡೋಣ. ಅವರು ಇನ್ನೊಂದು ಪೀಠ ರಚಿಸಲಿ' ಎಂದಿದೆ. ಮಾಲೇ ಗಾಂವ್ ಆರೋಪಿಗಳ ಬಗ್ಗೆ ಮೆದು ಧೋರಣೆ ತಾಳುವಂತೆ ಎನ್ಐಎ ಸೂಚಿಸಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಆರೋಪಿಸಿದ್ದರು.
Advertisement