ಮುಂಬೈ: ಶೀನಾ ಬೋರಾ ಹತ್ಯೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರಿಗೆ ಪ್ರಕರಣ ಹೇಗಾಯಿತು ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.
ಅದಕ್ಕೆ ಪೂರಕವಾಗಿ ಇಂದ್ರಾಣಿಯವರನ್ನು ವರ್ಲಿಯಲ್ಲಿರುವ ನಿವಾಸಕ್ಕೆ ಭಾನುವಾರ ಕರೆದುಕೊಂಡು ಹೋಗಿದ್ದರು. ಮುಖರ್ಜಿ ಜತೆ ಸಂಜೀವ್ ಖನ್ನಾ, ಶ್ಯಾಮಾವರ್ ರಾಯïರನ್ನೂ ಕರೆದೊಯ್ಯಲಾಗಿತ್ತು.
ಒಟ್ಟು 1 ಗಂಟೆ ಕಾಲ ಮನೆಯ ಸುತ್ತಮುತ್ತ ಪೊಲೀಸರು ಶೋಧ ಕಾರ್ಯ ನಡೆಸಿದರು. ಕಾರು ಶೆಡ್ನಲ್ಲೂ ಕೂಡ ಶೋಧ ನಡೆಸಲಾಯಿತು. ಇದೇ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಮುಂಬೈ ಪೊಲೀಸ್ ಆಯುಕ್ತ, ಪ್ರಕರಣದ ತನಿಖಾಧಿಕಾರಿ ರಾಕೇಶ್ ಮರಿಯಾ ಶೀನಾ ಪ್ರಕರಣ ಮತ್ತೊಂದು ಆರುಶಿ ಪ್ರಕರಣವಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
Advertisement