ನವದೆಹಲಿ: ಜೈನರ ಪರ್ಯೂಶನ್ ವ್ರತ ಹಿನ್ನೆಲೆಯಲ್ಲಿ ಎಂಟು ದಿನಗಳ ಕಾಲ ಗೋಮಾಂಸ ಮಾರಾಟ ನಿಷೇಧಿಸಲು ಹರ್ಯಾಣ ಸರ್ಕಾರ ತೀರ್ಮಾನಿಸಿದೆ.
ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 18ರ ವರೆಗೆ ಗೋಮಾಂಸ ಮಾರಾಟವನ್ನು ನಿಲ್ಲಿಸಬೇಕೆಂದು ಸರ್ಕಾರ ಹೇಳಿದೆ.
ಇದೀಗ ಗೋಮಾಂಸಕ್ಕೆ ನಿಷೇಧ ಹೇರಿದ ಬಿಜೆಪಿ ಆಡಳಿತಾರೂಢ 5 ನೇ ರಾಜ್ಯವಾಗಿದೆ ಹರ್ಯಾಣ.
ಛತ್ತೀಸ್ಗಢ ಸರ್ಕಾರ ಎರಡು ದಿನಗಳ ಕಾಲ ಗೋಮಾಂಸ ನಿಷೇಧಿಸುವಂತೆ ಶುಕ್ರವಾರ ಆಜ್ಞೆ ನೀಡಿತ್ತು. ಜೈನರು ಉಪವಾಸ ಆಚರಿಸುತ್ತಿರುವ ವಾರಗಳಲ್ಲಿ ಗೋವು, ಆಡು ಅಥವಾ ಇನ್ಯಾವುದೇ ಮಾಂಸಗಳನ್ನು ಮಾರುವುದಕ್ಕೆ ಸರ್ಕಾರ ತಡೆಯನ್ನೊಡ್ಡಿದೆ.
Advertisement