ಎಸ್ಐ ಪ್ರದೀಪ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಜತೆಗೆ ಹೊಸದಾದ 2 ಟೈಪ್ರೈಟರ್ಗಳನ್ನು ಖರೀದಿಸಿ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವರ ಮೂಲಕ ಕೃಷ್ಣಕುಮಾರ್ ಅವರ ಮನೆಬಾಗಿಲಿಗೆ ಅವುಗಳನ್ನು ತಲುಪಿಸಿ, ಮಾನವೀಯತೆ ಮೆರೆದರು. ಅಲ್ಲದೆ, ಜಿಲ್ಲಾಧಿಕಾರಿ ಕಚೇರಿ ಅಥವಾ ಇನ್ನಾವುದೇ ಸರ್ಕಾರಿ ಕಚೇರಿಯ ಸುತ್ತಮುತ್ತ ಸೂಕ್ತ ಸ್ಥಳವನ್ನು ಹುಡುಕಿ ಟೈಪ್ರೈಟರ್ ಅಂಗಡಿ ಇಟ್ಟುಕೊಳ್ಳಲು ಕೃಷ್ಣಕುಮಾರ್ ಅವರಿಗೆ ನೆರವಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.