ಪುತ್ರ ಚಿರಾಗ್ಗೇ ಎಲ್ಲ ಅಧಿಕಾರಗಳನ್ನು ನೀಡುತ್ತಿರುವುದು ಪಾಸ್ವಾನ್ರ ಅಳಿಯ ಅನಿಲ್ ಕುಮಾರ್ ಸಧುಗೆ ರುಚಿಸಿಲ್ಲ. ಅಲ್ಲದೆ, ಈ ಬಾರಿ ಅನಿಲ್ಗೆ ಟಿಕೆಟ್ ನಿರಾಕರಿಸಲಾಗಿದ್ದು, ಅವರ ಆಕ್ರೋಶಕ್ಕೆ ಮತ್ತೊಂದು ಕಾರಣ. ಪಕ್ಷದ ದಲಿತ ಸೇನೆಯ ನೇತೃತ್ವ ವಹಿಸಿರುವ ಅನಿಲ್, 2010ರ ಚುನಾವಣೆಯಲ್ಲಿ 53 ಸಾವಿರ ಮತ ಗಳಿಸಿದ್ದರೂ ನನ್ನನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇವರ ಮುಂದಿನ ನಡೆ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.