ಕೋಲ್ಕತಾದಲ್ಲಿದ್ದ ಜಪಾನೀಸ್ ಕಾನ್ಸುಲೇಟ್ನ ಚಾನ್ಸೆಲರ್ ಓಹ್ತಾಗೆ ಪತ್ರ ಬರೆದಿದ್ದ ಶರತ್ಚಂದ್ರ ಬೋಸ್, ಜಪಾನೀಯರಿಗೆ ರಹಸ್ಯ ಮಾಹಿತಿಗಳನ್ನು ಒದಗಿಸುವ ಸಂಘವೊಂದನ್ನು ಕಟ್ಟುತ್ತೇನೆ. ನಮ್ಮಲ್ಲಿ ಈಗ 10 ಸಾವಿರ ಮಂದಿಯಿದ್ದು, ಸಶಸ್ತ್ರ ಹೋರಾಟಕ್ಕೆ ಸನ್ನದ್ಧರಾಗಿದ್ದಾರೆ. ಹಣಕಾಸು ನೆರವು ಮತ್ತು ಶಸ್ತ್ರಾಸ್ರಗಳು ಸಿಕ್ಕರೆ ಕೆಲವೇ ತಿಂಗಳಲ್ಲಿ ಇವರ ಸಂಖ್ಯೆಯನ್ನು 50 ಸಾವಿರಕ್ಕೇರಿಸುತ್ತೇನೆ ಎಂದಿದ್ದರು. ಜತೆಗೆ, ಈ ಬಗ್ಗೆ ನೀವು `ಎಸ್'ಗೆ(ಸುಭಾಶ್ಚಂದ್ರ ಬೋಸ್ ಇರಬಹುದು ಎಂದು ನಂಬಲಾಗಿದೆ) ಒಂದು ಸಂದೇಶ ಕಳುಹಿಸಿ. ಇದು ಬಹಳ ಅರ್ಜೆಂಟ್ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದರು ಎನ್ನಲಾಗಿದೆ.