ಅಂದಗೆಟ್ಟ ತಾಜ್ ಮಹಲ್‌ನ್ನು ಶುಭ್ರಗೊಳಿಸಲು 9 ವರ್ಷಗಳೇ ಬೇಕು!

ಚಂದ್ರಕಾಂತ ಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್‌ಮಹಲ್‌ನ ಬಣ್ಣ ವಾಯು ಮಾಲಿನ್ಯದಿಂದಾಗಿ ಮಾಸಿ ಹೋಗಿದೆ. ಬಿಳಿ ಬಣ್ಣದಿಂದ ಹೊಳೆಯುತ್ತಿದ್ದ ತಾಜ್ ...
ತಾಜ್‌ಮಹಲ್‌
ತಾಜ್‌ಮಹಲ್‌
Updated on
ನವದೆಹಲಿ: ಚಂದ್ರಕಾಂತ ಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್‌ಮಹಲ್‌ನ ಬಣ್ಣ ವಾಯು ಮಾಲಿನ್ಯದಿಂದಾಗಿ ಮಾಸಿ ಹೋಗಿದೆ. ಬಿಳಿ ಬಣ್ಣದಿಂದ ಹೊಳೆಯುತ್ತಿದ್ದ ತಾಜ್ ಮಹಲ್ ಈಗ ಅಂದಗೆಟ್ಟು ನಸು ಹಳದಿ ಬಣ್ಣಕ್ಕೆ ತಿರುಗಿದೆ. ಈ ಹಳದಿ ಬಣ್ಣದ ಕಲೆಗಳನ್ನು ತೆಗೆಯಲು ಕನಿಷ್ಠ 9 ವರ್ಷಗಳೇ ಬೇಕು ಅಂತಿದ್ದಾರೆ ಪುರಾತತ್ವ ಶಾಸ್ತ್ರ ಇಲಾಖೆಯ ತಜ್ಞರು.

ಆಗ್ರಾದಲ್ಲಿ 17 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ಐತಿಹಾಸಿಕ ಸ್ಮಾರಕವು ಅಲ್ಲಿರುವ ಕಲ್ಲಿದ್ದಲು ಕಾರ್ಖಾನೆಗಳಿಂದ ಹೊರ ಸೂಸುವ ಮಲಿನ ಗಾಳಿಯಿಂದಾಗಿ ಅಂದ ಕಳೆದುಕೊಂಡಿದೆ.

ಮಡ್ ಪ್ಯಾಕ್ ಬಳಸಿ ತಾಜ್‌ನ್ನು ಶುಭ್ರಗೊಳಿಸುವ ಯೋಜನೆಯನ್ನು ಕಳೆದ ವರ್ಷವೇ ಘೋಷಿಸಲಾಗಿತ್ತು. ಆದರೆ ಇನ್ನೂ ಈ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ.

ಭಾರತದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ತಾಜ್ ಮಹಲ್ ನ್ನು  1631ರಲ್ಲಿ ಮೊಘಲ್ ಚಕ್ರವರ್ತಿ ಶಾಹ್‌ಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜ್ ಮಹಲ್‌ಳ ನೆನಪಿಗೋಸ್ಕರ ನಿರ್ಮಿಸಿದ್ದನು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com