ಮುಸ್ಲಿಂ ಕುಟುಂಬವೊಂದು ಗೋ ಮಾಂಸ ತಿಂದಿದೆ ಎಂಬ ಗಾಳಿ ಸುದ್ದಿ ಕೇಳಿದ ದಾದ್ರಿ ಗ್ರಾಮಸ್ಥರು ಇಟ್ಟಿಗೆ, ದೊಣ್ಣೆಯಿಂದ ಮೊಹಮ್ಮದ್ ಅಖಾಲಖ್ ಮತ್ತು ಮಗ(22) ನನ್ನು ಮನೆಯಿಂದ ಹೊರಗೆಳೆದು ಮನಬಂದಂತೆ ಥಳಿಸಿದ್ದರು. ಹೊಡೆದ ಏಟಿಗೆ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೊಹಮ್ಮದ್ ಸಾವನ್ನಪ್ಪಿದ್ದು, ಮಗನ ಪರಿಸ್ಥಿತಿ ಗಂಭೀರವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದು, ಪ್ರಕರಣದ ತನಿಖೆ ಆದೇಶಿಸಿದೆ.