ಮಣಿಗೆ ಕರುಳು ರೋಗವಿದ್ದ ಕಾರಣ ಈ ರಸಾಯನಿಕ ವಸ್ತುಗಳ ಸೇವನೆ ಅವರನ್ನು ಸಾವಿಗೆ ದೂಡಿತ್ತು. ಆದಾಗ್ಯೂ ಕರುಳುರೋಗದಿಂದಲೇ ಮಣಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಣಿ ಅವರು ಚಿಕಿತ್ಸೆಗೊಳಗಾಗಿದ್ದ ಅಮೃತಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನಡೆಸಿದ ಪರೀಕ್ಷೆಯಲ್ಲಿ ಮಣಿಯ ದೇಹದಲ್ಲಿ ರಾಸಾಯನಿಕ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಇದನ್ನು ಪತ್ತೆ ಹಚ್ಚಲು ತಜ್ಞರು ಬೇರೊಂದು ಪರೀಕ್ಷೆಯನ್ನು ನಡೆಸಬೇಕಾಗಿದೆ ಎಂದು ಅಮೃತಾ ಲ್ಯಾಬ್ ರಿಪೋರ್ಟ್ನಲ್ಲಿ ಹೇಳಲಾಗಿತ್ತು.