ಆತ್ಮಹತ್ಯೆಯಿಂದ ಏನನ್ನೂ ಸಾಧಿಸಲು ಆಗುವುದಿಲ್ಲ: ಹೇಮ ಮಾಲಿನಿ

ಬಾಲಿವುಡ್ ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ಕುರಿತು ಬಾಲಿವುಡ್ ಹಿರಿಯ ತಾರೆ, ಸಂಸದೆ ಹೇಮ ಮಾಲಿನಿ...
ಬಾಲಿವುಡ್ ನಟಿ, ಸಂಸದೆ ಹೇಮ ಮಾಲಿನಿ
ಬಾಲಿವುಡ್ ನಟಿ, ಸಂಸದೆ ಹೇಮ ಮಾಲಿನಿ
Updated on

ಮುಂಬೈ: ಬಾಲಿವುಡ್ ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ಕುರಿತು ಬಾಲಿವುಡ್ ಹಿರಿಯ ತಾರೆ, ಸಂಸದೆ ಹೇಮ ಮಾಲಿನಿ ಕೊಂಚ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಜೀವನವನ್ನು ಸುಲಭವಾಗಿ ಪರಿಗಣಿಸಿ ವಿನಾಕಾರಣ ಆತ್ಮಹತ್ಯೆ ಮಾಡಿಕೊಳ್ಳುವವರ ವಿರುದ್ಧ ಹರಿಹಾಯ್ದಿದ್ದಾರೆ. ''ಇಂತಹ ಪ್ರಜ್ಞಾಶೂನ್ಯ ಆತ್ಮಹತ್ಯೆಗಳಿಂದ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜೀವನ ಎಂದರೆ ನಮಗೆ ಜೀವನ ನಡೆಸಲು ದೇವರು ಕೊಟ್ಟ ಉಡುಗೊರೆ, ನಮ್ಮಿಷ್ಟ ಬಂದಂತೆ ಅದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆ ಹಕ್ಕು ನಮಗೂ ಇಲ್ಲ.'' ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com