ಪನಾಮ ಪೇಪರ್ಸ್ ಸೋರಿಕೆಯಲ್ಲಿ ನನ್ನ ಹೆಸರು ಕೇಳಿ ಬಂದಿರುವುದರಿಂದ ನನ್ನ ರಾಜಿನಾಮೆಗೆ ಆಗ್ರಹಿಸಲಾಗುತ್ತಿದೆ ಎಂದು ಕೇಳಿಪಟ್ಟೆ. ಆದರೆ, ನನ್ನನ್ನು ಮಹಾರಾಷ್ಟ್ರ ಸರ್ಕಾರ ಆಯ್ಕೆ ಮಾಡಿರುವುದು. ರಾಜ್ಯ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ಅಲ್ಲಿಯವರೆಗೆ ಸಾಮಾಜಿಕ ಸೇವೆಗಳಾದ ಹುಲಿ ಸಂರಕ್ಷಣೆ, ಪೋಲಿಯೋ, ಸ್ವಚ್ಛ ಭಾರತ, ಟಿಬಿ, ಹೆಪಟೈಟಿಸ್ ಬಿ, ಡಯಾಬಿಟಿಸ್, ಕುಟುಂಬ ಯೋಜನೆಗಳ ಬಗ್ಗೆ ಅಭಿಯಾನವನ್ನು ಮುಂದುವರೆಸುತ್ತೇನೆ ಎಂದು ಬಿಗ್ ಬಿ ತಿಳಿಸಿದ್ದಾರೆ.