ಪ್ರಧಾನಿ ಮೋದಿ ಪರವಾಗಿ ಅಜ್ಮೀರ್ ದರ್ಗಾಗೆ ಚಾದರ್ ಅಪಿಸಲಿರುವ ನಖ್ವಿ

ಶಾಂತಿ ಮತ್ತು ಸೌಹಾರ್ದೆತಯ ಸಂದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ತಾವು ಅಜ್ಮೀರ್ ದರ್ಗಾಗೆ ಸಲ್ಲಿಸಲಿರುವ ಚಾದರ್ ನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿಗೆ ಹಸ್ತಾಂತರಿಸಿದ್ದಾರೆ.
ಪ್ರಧಾನಿ ಮೋದಿ ಪರವಾಗಿ ಅಜ್ಮೀರ್ ದರ್ಗಾಗೆ ಚಾದರ್ ಅಪಿಸಲಿರುವ  ನಖ್ವಿ
ಪ್ರಧಾನಿ ಮೋದಿ ಪರವಾಗಿ ಅಜ್ಮೀರ್ ದರ್ಗಾಗೆ ಚಾದರ್ ಅಪಿಸಲಿರುವ ನಖ್ವಿ
Updated on

ನವದೆಹಲಿ: ಶಾಂತಿ ಮತ್ತು ಸೌಹಾರ್ದೆತಯ ಸಂದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ತಾವು ಅಜ್ಮೀರ್ ದರ್ಗಾಗೆ ಸಲ್ಲಿಸಲಿರುವ ಚಾದರ್ ನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿಗೆ ಹಸ್ತಾಂತರಿಸಿದ್ದಾರೆ. 
ಏ.10 ರಂದು ರಾಜಸ್ಥಾನದ ಅಜ್ಮೀರ್ ದರ್ಗಾಗೆ ಭೇಟಿ ನೀಡಲಿರುವ ಮುಕ್ತಾರ್ ಅಬ್ಬಾಸ್ ನಖ್ವಿ ಪ್ರಧಾನಿ ಮೋದಿ ಪರವಾಗಿ ಅಜ್ಮೀರ್ ದರ್ಗಾಗೆ ಚಾದರ್ ಅರ್ಪಿಸಲಿದ್ದಾರೆ. ಚಾದರ್ ಜೊತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಾಂತಿ ಮತ್ತು ಸೌಹಾರ್ದೆತಯ ಸಂದೇಶವನ್ನೂ ಕಳಿಸಿದ್ದು, ಇದನ್ನು ದರ್ಗಾಗೆ ಚಾದರ್ ಅರ್ಪಿಸುವ ವೇಳೆ ನಖ್ವಿ ಓದಲಿದ್ದಾರೆ.
ಏ.9 ರಂದು ಅಜ್ಮೀರ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ 804 ನೇ ಉರುಸ್ ಕಾರ್ಯಕ್ರಮ ಪ್ರಾರಂಭವಾಗಿದೆ. ಅಜ್ಮೀರ್ ದರ್ಗಾಗೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಸೂಫಿ ಸಮಿತಿ, ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಉರುಸ್ ಕಾರ್ಯಕ್ರಮದ ದಿನದಂದು ರಾಷ್ಟ್ರೀಯ ರಜೆ ಘೋಷಿಸಬೇಕೆಂದು ಮನವಿ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com