ಈ ವರ್ಷ ಸಾಧಾರಣ ನೈರುತ್ಯ ಮಾನ್ಸೂನ್ ಮಳೆ ನಿರೀಕ್ಷೆ

ಎರಡು ವರ್ಷಗಳಿಂದ ಮಳೆ ಕೊರತೆಯಿಂದ ಬೇಸತ್ತಿರುವ ದೇಶದ ರೈತನಿಗೆ ಸಿಹಿ ಸುದ್ದಿಯಿದೆ. ಈ ಬಾರಿ ನೈರುತ್ಯ ಮಾನ್ಸೂನ್ ಮಳೆ ಸಾಧಾರಣವಾಗಿ ಬೀಳಲಿದ್ದು ಆತಂಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಎರಡು ವರ್ಷಗಳಿಂದ ಮಳೆ ಕೊರತೆಯಿಂದ ಬೇಸತ್ತಿರುವ ದೇಶದ ರೈತನಿಗೆ ಸಿಹಿ ಸುದ್ದಿಯಿದೆ.  ಈ ಬಾರಿ ನೈರುತ್ಯ ಮಾನ್ಸೂನ್ ಮಳೆ ಸಾಧಾರಣವಾಗಿ ಬೀಳಲಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಕೃಷಿ ಇಲಾಖೆ ತಿಳಿಸಿದೆ.

ಈ ಬಾರಿಯ ಮುಂಗಾರು ಮಳೆ ಸಾಧಾರಣವಾಗಿದ್ದು, ಎಲ್ಲಾ ರಾಜ್ಯಗಳ ರೈತರು ಕೃಷಿ ಬಿತ್ತನೆಗಾಗಿ  ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬಹುದು. ಜೂನ್ ನಲ್ಲಿ ಖಾರೀಫ್ ಬೆಳೆ ಆರಂಭವಾಗಲಿದೆ.

ಈ ತಿಂಗಳ ಅಂತ್ಯದಲ್ಲಿ ಕೇಂದ್ರ ಹವಾಮಾನ ಇಲಾಖೆ ಈ ಬಾರಿಯ ಮಾನ್ಸೂನ್ ಮಳೆಯ ಸ್ಪಷ್ಟ ಚಿತ್ರಣ ನೀಡಲಿದೆ ಎಂದು ಅವರು ಹೇಳಿದ್ದಾರೆ,

ಎಲ್ ನಿನೋ ಪ್ರಭಾವ ತಗ್ಗುತ್ತಿದ್ದು ಈ ವರ್ಷ ಉತ್ತಮ ಮಾನ್ಸೂನ್ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಶೋಭನಾ ಕೆ. ಪಟ್ನಾಯಕ್ ಹೇಳಿದ್ದಾರೆ,


ಕಳೆದ ವರ್ಷ ಮಳೆಯ ಕೊರತೆಯಿಂದ ಆಹಾರ ಉತ್ಪಾದನೆಯಲ್ಲಿ ಪ್ರಗತಿ ಕುಂಠಿತವಾಗಿತ್ತು,  2014-15 ರಲ್ಲಿ ಭಾರತದ ಆಹಾರ ಉತ್ಪಾದನಾ ಪ್ರಮಾಣ 252.02 ಮಿಲಿಯನ್ ಟನ್ ಕೊರತೆಯಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com