ಯಾರೇ ಆಗಲಿ, ಕಾನೂನು ಉಲ್ಲಂಘಿಸಿದವರು ಶಿಕ್ಷೆ ಅನುಭವಿಸಲೇಬೇಕು. ಪನಾಮ ಪಟ್ಟಿಯಲ್ಲಿ ಭಾರತೀಯರ ಹೆಸರು ಕೇಳಿ ಕಾಂಗ್ರೆಸ್ ಸಂಭ್ರಮಾಚರಣೆ ಮಾಡಿಲ್ಲ. ಬದಲಾಗಿ ವಿಷಾಧಿಸಿದೆ. ಪನಾಮ ಪೇಪರ್ಸ್ ನಲ್ಲಿ ಭಾರತೀಯ ಉದ್ಯಮಿಗಳು ಸೇರಿ ಪ್ರಮುಖ ಗಣ್ಯರ ಹೆಸರು ಪ್ರಸ್ತಾಪವಾಗಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದೆ ಎಂದ ಅವರು, ಪನಾಮ ಪೇಪರ್ಸ್ ನಲ್ಲಿ ಕಾಂಗ್ರೆಸ್ ನವರ ಹೆಸರು ಬರುತ್ತದೆ ಎಂದು ಜೇಟ್ಲಿ ಹೇಗೆ ತಿಳಿದಿದೆ? ಅಲ್ಲದೇ, ಇನ್ನು ಈ ಕುರಿತು ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.