ಬರಪೀಡಿತ ಲಾತೂರ್‌ಗೆ ರೈಲು ಮೂಲಕ ಶುದ್ಧ ಜಲ

ಮಹಾರಾಷ್ಟ್ರದ ಬರ ಪೀಡಿತ ಪ್ರದೇಶವಾದ ಲಾತೂರ್‌ಗೆ ರೈಲು ಮೂಲಕ ಶುದ್ಧ ಜಲ ಪೂರೈಸಲಾಗಿದೆ. ಮಹಾರಾಷ್ಟ್ರದ ಮರಾಠ್‌ವಾಡಾ ಪ್ರದೇಶದಲ್ಲಿರುವ...
ನೀರು ಪೂರೈಸುವ ರೈಲು
ನೀರು ಪೂರೈಸುವ ರೈಲು
Updated on
ಮುಂಬೈ: ಮಹಾರಾಷ್ಟ್ರದ ಬರ ಪೀಡಿತ ಪ್ರದೇಶವಾದ ಲಾತೂರ್‌ಗೆ  ರೈಲು ಮೂಲಕ ಶುದ್ಧ ಜಲ ಪೂರೈಸಲಾಗಿದೆ. 
ಮಹಾರಾಷ್ಟ್ರದ ಮರಾಠ್‌ವಾಡಾ ಪ್ರದೇಶದಲ್ಲಿರುವ ಲಾತೂರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಭೀಕರ ಬರಗಾಲದಿಂದ ಕಂಗೆಟ್ಟಿವೆ. ಈ ಬಾರಿ ಇಲ್ಲಿಗೆ 15 ದಿನಗಳಿಗೊಮ್ಮೆ ಮುನ್ಸಿಪಾಲಿಟಿ ನೀರು ಪೂರೈಕೆ ಮಾಡುತ್ತಿರುವುದಿಂದ ಜನರು ಕುಡಿಯುವ ನೀರಿಗೆ ಪರದಾಟ ಮಾಡುತ್ತಿದ್ದಾರೆ.
ಇದನ್ನು ಮನಗಂಡ ಮಹಾ ಸರ್ಕಾರ ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ರೈಲಿನಲ್ಲಿ ನೀರು ಸಾಗಿಸುವ ಕಾರ್ಯವನ್ನು ಹಮ್ಮಿ ಕೊಂಡಿದೆ. ಮಂಗಳವಾರ ಬೆಳಗ್ಗೆ  5 ಲಕ್ಷ ಲೀಟರ್‌ನ್ನು ಹೊತ್ತ ರೈಲು ಲಾತೂರ್ ತಲುಪಿದೆ. 
ನೀರು ಹೊತ್ತು ತಂದ ವಾಟರ್ ಟ್ರೈನ್‌ನಲ್ಲಿ 10 ಟ್ಯಾಂಕರ್‌ಗಳಿದ್ದು, ಪ್ರತೀ ಟ್ಯಾಂಕರ್‌ನಲ್ಲಿ 50,000 ಲೀಟರ್ ನೀರು ಸರಬರಾಜು ಮಾಡಲಾಗುತ್ತದೆ.
ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಾಜ್ ನಿಂದ ಈ ಕುಡಿನೀರನ್ನು ಲಾತೂರ್‌ಗೆ ಸರಬರಾಜು ಮಾಡಲಾಗುತಿದ್ದು, ಪ್ರಸ್ತುತ ನಗರಕ್ಕೆ ಪ್ರತಿ ದಿನ  20 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ.
ಇನ್ನು ಮುಂದಿನ ರೈಲು ಏಪ್ರಿಲ್ 15 ಕ್ಕೆ ಲಾತೂರ್‌ಗೆ ನೀರು ಪೂರೈಸಲಿದೆ ಎಂದು ಅಧಿಕೃತರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com