ಕೊಹಿನ್ನೂರ್ ವಜ್ರವನ್ನು ಬ್ರಿಟಿಷರು ಕದ್ದಿಲ್ಲ; ಅದು ಉಡುಗೊರೆಯಾಗಿ ನೀಡಿದ್ದು!

ಕೊಹಿನ್ನೂರ್ ವಜ್ರವನ್ನು ಕದಿಯಲಾಗಿಲ್ಲ ಅಥವಾ ಬಲವಂತವಾಗಿ ಕೊಂಡೊಯ್ಯಲಾಗಿಲ್ಲ. ಈ ಅಮೂಲ್ಯ ವಜ್ರವನ್ನು ಮಹಾರಾಜ ರಂಜಿತ್ ಸಿಂಗ್...
ಕೊಹಿನ್ನೂರ್ ವಜ್ರ
ಕೊಹಿನ್ನೂರ್ ವಜ್ರ
Updated on
ನವದೆಹಲಿ: ಬ್ರಿಟನ್ ಸರ್ಕಾರದ ವಶದಲ್ಲಿರುವ ಅಮೂಲ್ಯ ಕೊಹಿನ್ನೂರ್ ವಜ್ರವನ್ನು ವಾಪಸ್ ಕೇಳುವ ಹಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಕೇಂದ್ರ ಸಾಂಸ್ಕೃತಿಕ  ಸಚಿವಾಲಯದ ದಾಖಲೆಗಳ ಪ್ರಕಾರ ಕೊಹಿನ್ನೂರ್ ವಜ್ರವನ್ನು ಕದಿಯಲಾಗಿಲ್ಲ ಅಥವಾ ಬಲವಂತವಾಗಿ ಕೊಂಡೊಯ್ಯಲಾಗಿಲ್ಲ. ಈ ಅಮೂಲ್ಯ ವಜ್ರವನ್ನು ಮಹಾರಾಜ ರಂಜಿತ್ ಸಿಂಗ್ ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಸಾಲಿಸಿಟರ್ ಜನರಲ್ ಹೇಳಿದ್ದಾರೆ.
ಆಲ್ ಇಂಡಿಯಾ ಹ್ಯೂಮನ್ ರೈಟ್ಸ್ ಆ್ಯಂಡ್ ಸೋಷ್ಯಲ್ ಜಸ್ಟೀಸ್ ಫ್ರಂಟ್ ಎಂಬ ಸಂಘಟನೆ ಸಲ್ಲಿಸಿದ ಅರ್ಜಿಯ ವಿಚಾರಣೆ ಸೋಮವಾರ ನಡೆದಿದ್ದು, ಆ ವೇಳೆ 
ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಈ ರೀತಿಯ ಉತ್ತರ ನೀಡಿದೆ. 
ಕೊಹಿನ್ನೂರ್ ವಜ್ರ,  ಟಿಪ್ಪು ಸುಲ್ತಾನ್ ಅವರ ಖಡ್ಗ ಮತ್ತು ಉಂಗುರವನ್ನು ಬ್ರಿಟಿಷರು ಕೊಂಡೊಯ್ದಿದ್ದು, ಅದನ್ನು ವಾಪಸ್ ತರಬೇಕು ಎಂಬುದು ಈ ಸಂಘಟನೆಯ ಆಗ್ರಹವಾಗಿದೆ.
ಆದರೆ ಕೊಹಿನ್ನೂರ್ ವಜ್ರವನ್ನು ಬ್ರಿಟಿಷರು ಭಾರತದಿಂದ ಕದ್ದೊಯ್ದಿಲ್ಲ, ಬಲವಂತವಾಗಿ ತೆಗೆದುಕೊಂಡೂ ಹೋಗಲಿಲ್ಲ ಎಂದು ಸರ್ಕಾರ ಹೇಳಿದೆ.
ಆದಾಗ್ಯೂ, ಈ ಪ್ರಕರಣದಲ್ಲಿ ವಿದೇಶಾಂಗ ಸಚಿವಾಲಯದ ನಿಲುವು ಏನೆಂದು ಪ್ರಸ್ತುತ ಸಚಿವಾಲಯ ಸುಪ್ರೀಂಕೋರ್ಟ್‌ಗೆ ತಿಳಿಸಿಲ್ಲ. ಈ ಬಗ್ಗೆ  ವರದಿ ಸಲ್ಲಿಸಲು ಕೋರ್ಟ್ ಒಂದು ವಾರದ ಕಾಲಾವಕಾಶವನ್ನು ನೀಡಿದೆ.
1850ರಲ್ಲಿ ವಿಕ್ಟೋರಿಯಾ ಮಹಾರಾಣಿಗೆ ಮಹಾರಾಜ ರಂಜಿತ್ ಸಿಂಗ್ ಈ ವಜ್ರವನ್ನು ಉಡುಗೊರೆಯಾಗಿ ನೀಡಿದ್ದರು. ಕಿರೀಟದಲ್ಲಿರುವ ಈ ವಜ್ರವೀಗ ಟವರ್ ಆಫ್ ಲಂಡನ್‌ನಲ್ಲಿ ಪ್ರದರ್ಶನ ವಸ್ತುವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com