ಇನ್ನು ಸಂಸತ್ ಸದಸ್ಯರನ್ನು ಸಂಸತ್ತಿಗೆ ಬರದಂತೆ ನಿಯಂತ್ರಿಸುವುದು ಹೇಗೆ ಸಾಧ್ಯ?’ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಅವರು, ಸಂಸತ್ ಅಧಿವೇಶನ ಇಂದು ಪೂನಾರಂಭವಾಗಿದ್ದು, ಸಮ-ಬೆಸ ನೀತಿಯಿಂದಾಗಿ ಹಲವು ಸಂಸದರು ಕಲಾಪಕ್ಕೆ ಗೈರು ಆಗಿದ್ದಾರೆ. 10 ಸದಸ್ಯರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ದೆಹಲಿಯ ಹೊರಗಡೆಯಿಂದ ಬರುತ್ತಾರೆ. ಅವರು ಭದ್ರತೆಯಿಲ್ಲದೆ ಹಾಗೂ ಖಾಸಗಿ ವಾಹನದಲ್ಲಿ ಸಂಸತ್ ಪ್ರವೇಶಿಸಲು ಸಾಧ್ಯವಿಲ್ಲ ಎಂದರು.