ಲೋಕಸಭೆಯಲ್ಲಿ ಬುದ್ಧಿವಂತರು, ಮೆದುಳು ಇರುವವರು ಇಲ್ಲ, ಎಲ್ಲಾ ಬುದ್ಧಿವಂತರು ರಾಜ್ಯಸಭೆಯಲ್ಲಿ ಇರುವುದು ಎಂದು ಭಾವಿಸಿರುವಂತಿದೆ ಎಂದ ಮೊಯ್ಲಿ, ನಾವು ಜಂಟಿ ಆಯ್ಕೆ ಸಮಿತಿ ರಚಿಸಲು ಹೇಳಿದಾಗ ನೀವು ಅದನ್ನು ತಿರಸ್ಕರಿಸಿದಿರಿ.ನೀವು ನಮ್ಮ ಮಾತನ್ನು ಕೇಳಿದ್ದರೆ, ಮಸೂದೆ ಬಗ್ಗೆ ಇದ್ದ ಭಿನ್ನಾಭಿಪ್ರಾಯಗಳನ್ನು ಮೊದಲೇ ಬಗೆಹರಿಸಬಹುದಿತ್ತು. ಪ್ರಜಾಪ್ರಭುತ್ವವೆಂದರೆ ಕೇವಲ ಬಹುಮತವೆಂದಲ್ಲ, ಒಮ್ಮತದ ವಿಕಾಸ ಎಂದರು.