ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡ ಸಚಿವ: ನಾನು ವಿಐಪಿ ಅದರಲ್ಲಿ ತಪ್ಪೇನಿದೆ? ಉದ್ಧಟನದ ಪ್ರಶ್ನೆ

ತಮ್ಮ ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡ ಒಡಿಸಾ ಸಚಿವ ಜೋಗೇಂದ್ರ ಬೆಹರ್ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. .,..
ಶೂ ಕಟ್ಟಿಸಿಕೊಳ್ಳುತ್ತಿರುವ ಸಚಿವ
ಶೂ ಕಟ್ಟಿಸಿಕೊಳ್ಳುತ್ತಿರುವ ಸಚಿವ

ಭುವನೇಶ್ವರ: ತಮ್ಮ ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡ ಒಡಿಸಾ ಸಚಿವ ಜೋಗೇಂದ್ರ ಬೆಹರ್ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣದ ನಂತರ ತನ್ನ ಬೂಟಿನ ಲೇಸ್ ಕಟ್ಟುವಂತೆ ಸರ್ಕಾರಿ ಅಧಿಕಾರಿಗೆ ಸೂಚಿಸಿದ್ದಾರೆ.

ಸಚಿವರ ಈ ವರ್ತನೆಯನ್ನು ಮಾಧ್ಯಮಗಳು ನೀವು ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದಕ್ಕೆ ‘ನಾನು ಮಂತ್ರಿ, ಧ್ವಜ ಹಾರಿಸುವ ಅಧಿಕಾರವಿರುವುದು ನನಗೆ, ಅಧಿಕಾರಿಗಲ್ಲ ಹೀಗಾಗಿ ನಾನು ಮಾಡಿಸಿದ ಕೆಲಸ ತಪ್ಪೇನಿಲ್ಲ’ ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಒಡಿಶಾದ ಕ್ಯಾಬಿನೆಟ್ ಸಚಿವ ಜೊಗೇಂದ್ರ ಬೆಹರಾ ತಮ್ಮ ಬೆಂಗಾವಲು ಪಡೆ ಅಧಿಕಾರಿ (ಪಿಎಸ್​ಓ)ಗೆ ಕಿಯೊಂಜಾರ್ ಜಿಲ್ಲೆಯಲ್ಲಿ ಧ್ವಜಾರೋಹಣದ ನಂತರ ಬೂಟು ಧರಿಸಿ ಲೇಸ್ ಕಟ್ಟಲು ಹೇಳಿದ್ದು, ಅದೀಗ ಸಾಕಷ್ಟು ಆಕ್ಷೇಪಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com