ಎಐಎಡಿಎಂಕೆ ಶಾಸಕರೊಬ್ಬರ ಹೇಳಿಕೆ ವಿರುದ್ದ ಸಿಡಿದೆದ್ದ ಡಿಎಂಕೆ ಶಾಸಕರು ತೀವ್ರ ಗದ್ದಲ ನಡೆಸಿದರು. ಈ ವೇಳೆ ಸ್ಪೀಕರ್ ಧನ್ಪಾಲ್ ಹಾಗೂ ಸದನದ ನಾಯಕ ಸಚಿವ ಪನ್ನೀರ್ ಸೆಲ್ವಂ ನಡುವೆ ಡಿಎಂಕೆ ಶಾಸಕರ ತೀವ್ರವಾಗ್ವಾದ ನಡೆಯಿತು. ಗದ್ದಲ ತೀವ್ರವಾದಂತೆ ಸ್ಪೀಕರ್ ಶಾಸಕರನ್ನು ಅಮಾನತು ಮಾಡಿ ಮಾರ್ಷಲ್ಗಳ ಬಳಿ ಹೋರಹಾಕಲು ಆದೇಶಿಸಿದರು. ಈ ವೇಳೆ ಸದನಕ್ಕೆ ಪ್ರವೇಶಗೈದ ಸ್ಟಾಲಿನ್, ಹಿರಿಯ ಶಾಸಕ ದೊರೈ ಮುರುಗನ್ ಅವರನ್ನೂ ಮಾರ್ಷಲ್ಗಳು ಬಲವಂತಾಗಿ ಹೊರಗೆ ಎಳೆದೊಯ್ದರು. ಮುರುಗನ್ ಅವರು ಈ ವೇಳೆ ಕುಸಿದು ಬೀಳುವ ಹಂತಕ್ಕೆ ತಲುಪಿದರು.