ಪ್ರವಾಹ ಪೀಡಿತ ಪ್ರದೇಶದಲ್ಲಿ ಮುಖ್ಯಮಂತ್ರಿಯನ್ನು ಹೊತ್ತು ಸಾಗಿದ ಪೊಲೀಸರು: ಫೋಟೋ ವೈರಲ್

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪೊಲೀಸರು ಎತ್ತುಕೊಂಡು,..
ಮುಖ್ಯಮಂತ್ರಿಯನ್ನು ಎತ್ತುಕೊಂಡು ಸಾಗುತ್ತಿರುವ ಪೊಲೀಸರು
ಮುಖ್ಯಮಂತ್ರಿಯನ್ನು ಎತ್ತುಕೊಂಡು ಸಾಗುತ್ತಿರುವ ಪೊಲೀಸರು
Updated on

ಭೂಪಾಲ್: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪೊಲೀಸರು ಎತ್ತುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿಎಂ ಶಿವರಾಜ್ ಸಿಂಗ್ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪನ್ನಾ ಜಿಲ್ಲೆಯ ಅಮನ್‍ಗಂಜ್ ತೆಹಸಿಲ್‍ ನಲ್ಲಿ ಘಟನೆ ನಡೆದಿದೆ. ಮೊಬೈಲ್‍ನಲ್ಲಿ ತೆಗೆಯಲಾಗಿರುವ ಈ ಫೋಟೋದಲ್ಲಿ 57 ವರ್ಷದ ಶಿವರಾಜ್ ಸಿಂಗ್ ಇಬ್ಬರು ಪೊಲೀಸರ ಹೆಗಲ ಮೇಲೆ ಕೈ ಹಾಕಿದ್ದು ಆ ಪೊಲೀಸರು ಮೊಣಕಾಲುದ್ದ ಇರುವ ನೀರಿನಲ್ಲಿ ಸಿಎಂರನ್ನು ಎತ್ತಿಕೊಂಡು ಹೋಗುತ್ತಿದ್ದಾರೆ.

ಸರ್ಕಾರದ ಮೂಲಗಳ ಮಾಹಿತಿಯ ಪ್ರಕಾರ ಪ್ರವಾಹದ ನೀರಿನಲ್ಲಿ ನಡೆದು ಸಿಎಂಗೆ ತೊಂದರೆಯಾಗಬಾರದು ಅಥವಾ ಹಾವುಗಳಿಂದ ಕಚ್ಚಿಸಿಕೊಳ್ಳಬಹುದು ಎಂಬ ಮುನ್ನೆಚರಿಕೆಯಿಂದ ಅವರನ್ನು ಎತ್ತಿಕೊಂಡು ಹೋಗಲು ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com