ಭಾರತ ವಿರೋಧಿ ಬಂಡಾಯ ಕೋರರನ್ನು ಒಳಗೆ ಬಿಡುವುದಿಲ್ಲ: ಮಯನ್ಮಾರ್ ಭರವಸೆ

ಭಾರತದ ವಿರುದ್ಧ ಬಂಡುಕೋರರು ಒಳನುಸುಳಲು ಬಿಡುವುದಿಲ್ಲ ಎಂದು ಮಯನ್ಮಾರ್ ವಿದೇಶಾಂಗ ಸಚಿವೆ ಸುಷ್ಮಾ...
ಮಯನ್ಮಾರ್ ವಿದೇಶಾಂಗ ಸಚಿವೆ ಅಂಗ್ ಸಾನ್ ಸೂಕಿ ಅವರನ್ನು ಭೇಟಿ ಮಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ಮಯನ್ಮಾರ್ ವಿದೇಶಾಂಗ ಸಚಿವೆ ಅಂಗ್ ಸಾನ್ ಸೂಕಿ ಅವರನ್ನು ಭೇಟಿ ಮಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
Updated on
ನವದೆಹಲಿ: ಭಾರತದ ವಿರುದ್ಧ ಬಂಡುಕೋರರು ಒಳನುಸುಳಲು ಬಿಡುವುದಿಲ್ಲ ಎಂದು ಮಯನ್ಮಾರ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಭರವಸೆ ನೀಡಿದೆ.
ಮಯನ್ಮಾರ್ ನಲ್ಲಿ ಸುಕಿಯವರ ಪ್ರಜಾಸತ್ತಾತ್ಮಕ ನ್ಯಾಶನಲ್ ಲೀಗ್(ಎನ್ ಎಲ್ ಡಿ) ಅಧಿಕಾರಕ್ಕೆ ಬಂದ ನಂತರ ಸುಷ್ಮಾ ಸ್ವರಾಜ್ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ.
ಮಯನ್ಮಾರ್ ಅಧ್ಯಕ್ಷ ಯು ಹ್ ಟಿನ್ ಕ್ಯಾವ್ ಮತ್ತು ದೇಶದ ಸಲಹೆಗಾರ್ತಿ ಮತ್ತು ವಿದೇಶಾಂಗ ಸಚಿವೆ ಅಂಗ್ ಸಾನ್ ಸೂಕಿ ಅವರನ್ನು ಭೇಟಿ ಮಾಡಿದರು. 
ಗಡಿ ಭಾಗದಲ್ಲಿ ಶಾಂತಿ, ಭದ್ರತೆ ಕಾಪಾಡುವಂತೆ ನೋಡಿಕೊಳ್ಳಲು ಎರಡೂ ದೇಶಗಳು ಎಲ್ಲಾ ಪ್ರಯತ್ನಗಳನ್ನು ಮಾಡಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಮಯನ್ಮಾರ್ ದೇಶದ ಒಳಗಿನಿಂದ ದಂಗೆಕೋರರು ಭಾರತದೊಳಗೆ ಹೋಗಲು ಯತ್ನಿಸಿದರೆ ಅದನ್ನು ಸರ್ಕಾರ ಸಹಿಸುವುದಿಲ್ಲ, ಒಪ್ಪುವುದು ಕೂಡ ಇಲ್ಲ, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಸ್ಪರ ಸಹಕಾರದ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಅಂಗ್ ಸಾನ್ ಸೂಕಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ಮಯನ್ಮಾರ್ ಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.  
ನಿಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸಲು, ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭಾರತ ಬದ್ಧವಾಗಿದೆ ಎಂದು ಸುಷ್ಮಾ ಸ್ವರಾಜ್ ಸು ಕಿ ಅವರಿಗೆ ಸಭೆ ವೇಳೆ ತಿಳಿಸಿದರು. ಸುಷ್ಮಾ ಸ್ವರಾಜ್ ಅವರ ಈ ಭೇಟಿ ವೇಳೆ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಮತ್ತು ಇತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುಷ್ಮಾ ಸ್ವರಾಜ್ ಅವರ ಮಯನ್ಮಾರ್ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ವಿಕಾಸ್ ಸ್ವರೂಪ್, ''ಭಾರತದ ಹಳೆಯ ಸ್ನೇಹಿತ, ಹೊಸ ಜೊತೆಗಾರ ಬೆಳವಣಿಗೆಯಲ್ಲಿದೆ'' ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com