ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಮರಿಗೂ ಗೋವು ಮಾತೆ: ಸ್ವಾಮಿ ಸ್ವರೂಪಾನಂದ

ಹಸು ಕೇವಲ ಹಿಂದೂಗಳಿಗೆ ಮಾತ್ರ ತಾಯಿಯಲ್ಲ, ಮುಸಲ್ಮಾನರಿಗೂ ಅದು ತಾಯಿ ಸಮಾನ ಎಂದು ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ...
ಸ್ವಾಮಿ ಸ್ವರೂಪಾನಂದ ಸರಸ್ವತಿ
ಸ್ವಾಮಿ ಸ್ವರೂಪಾನಂದ ಸರಸ್ವತಿ

ಹರಿದ್ವಾರ: ಹಸು ಕೇವಲ ಹಿಂದೂಗಳಿಗೆ ಮಾತ್ರ ತಾಯಿಯಲ್ಲ, ಮುಸಲ್ಮಾನರಿಗೂ ಅದು ತಾಯಿ ಸಮಾನ ಎಂದು ದ್ವಾರಕಾ ಶಾರದಾ ಪೀಠದ ಮುಖ್ಯಸ್ಥ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.

ಹಸುವಿನ ಹಾಲಿನಿಂದ ಹಿಂದೂಗಳಷ್ಟೇ ಮುಸ್ಲಿಮರು ಕೂಡ ಪ್ರೊಟೀನ್ ಪಡೆಯುತ್ತಾರೆ. ಹೀಗಾಗಿ ಹಸು ಮುಸ್ಲಿಮರಿಗೂ ಕೂಡ ತಾಯಿ ಸಮಾನವಾಗಿದೆ.

ಹಸುಗಳನ್ನು ಕೇವಲ ಹಿಂದೂಗಳು ಮಾತ್ರ ರಕ್ಷಿಸುತ್ತಾರೆ ಎಂಬುದು ವಿಷಯವಲ್ಲ, ದೇಶದ ವಿವಿಧ ಭಾಗಗಳಲ್ಲಿ ಗೋ ಹತ್ಯೆ ನಡೆಯುವುದನ್ನು ತಪ್ಪಿಸಲು ಏಕ ರೂಪವಾದ ಕಾನೂನು ಜಾರಿಗೆ ತರಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಗೋ ಹತ್ಯೆ ನಿಷೇಧಿಸುವಂತೆ ಈಗಾಗಲೇ ಸುಪ್ರಿಂ ಕೋರ್ಟ್ ನಲ್ಲಿ  ಹಲವು ಅರ್ಜಿಗಳು ಸಲ್ಲಿಕೆಯಾಗಿ, ಹಲವು ಬಾರಿ ತಿರಸ್ಕಾರಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಹಸುವಿನ ಹಾಲಿನಿಂದ ಕೇವಲ ಪ್ರೋಟೀನ್ ಸಿಗುತ್ತದೆ ಎಂಬುದು ಮಾತ್ರವಲ್ಲದೇ ಹಸುವಿನ ಇತರ ಉತ್ಪನ್ನಗಳು ಹಲವು ರೀತಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಸಹಾಯವಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com