ಮಾಜಿ ಸಚಿವ ಪಿ. ಚಿದಂಬರಂ ಪತ್ನಿಗೆ ಜಾರಿ ನಿರ್ದೇಶನಾಲಯ ಸಮನ್ಸ್

ಬಹುಕೋಟಿ ಶಾರದಾ ಚಿಟ್ ಪಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ..
ನಳಿನಿ  ಚಿದಂಬರಂ
ನಳಿನಿ ಚಿದಂಬರಂ

ದೆಹಲಿ: ಬಹುಕೋಟಿ ಶಾರದಾ ಚಿಟ್ ಪಂಡ್ ಹಗರಣಕ್ಕೆ ಸಂಬಂಧಿಸಿದಂತೆ  ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ  ಸಮನ್ಸ್ ನೀಡಿದೆ.

ಪಿ.ಚಿದಂಬರಂ ಪತ್ನಿ ನಳಿನಿ ಚಿದಂಬರಂ ಹೆಸರನ್ನು ಶಾರದಾ ಚಿಟ್ ಫಂಡ್ ಹಗರಣದ ಆರೋಪ ಪಟ್ಟಿಯಲ್ಲಿ  ಸಿಬಿಐ ಸೇರ್ಪಡೆಗೊಳಿಸಿತ್ತು.  ನಳಿನಿಯವರನ್ನು ಸಾಕ್ಷಿದಾರಳಾಗಿ ಅಥವಾ ಆರೋಪಿಯಾಗಿ ಹೆಸರಿಸಿಲ್ಲ. ಆದರೆ, ಹಗರಣದ ಮಾಹಿತಿಯನ್ನು ಪಡೆಯಲು ಅವರ ಹೆಸರನ್ನು ಸಿಬಿಐ ಆರೋಪ ಪಟ್ಟಿಯಲ್ಲಿ ದಾಖಲಿಸಿದೆ ಎನ್ನಲಾಗಿತ್ತು.
 
ಶಾರದಾ ಹಗರಣದಲ್ಲಿ ಆರೋಪಿಯಾಗಿರುವ ಮನೋರಂಜನಾ ಸಿಂಗ್ ಪರ ವಕೀಲರಾಗಿರುವ ನಳಿನಿಗೆ ಶಾರದ ಹಗರಣದಿಂದ ಶುಲ್ಕ ಪಾವತಿಸಲಾಗಿದೆ ಎನ್ನುವ ಮಾಹಿತಿ ಕೇಳಿ ಬಂದಿತ್ತು ಎಂದು ಸಿಬಿಐ ಅಧಿಕಾರಿಗಳು ತನಿಖೆಯ ಬಳಿಕ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com