ಕೃಷ್ಣ ಜನ್ಮಾಷ್ಠಮಿ: ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ

ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದ್ದು, ದೇಶಾದ್ಯಂತ ಎಲ್ಲಾ ಕೃಷ್ಣ ದೇಗುಲಗಳಲ್ಲಿ ಭಕ್ತ ಸಾಗರ ಕಂಡು ಬರುತ್ತಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದ್ದು, ದೇಶಾದ್ಯಂತ ಎಲ್ಲಾ ಕೃಷ್ಣ ದೇಗುಲಗಳಲ್ಲಿ  ಭಕ್ತ ಸಾಗರ ಕಂಡು ಬರುತ್ತಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪ್ರಧಾನಿ ನರೆಂದ್ರ ಮೋದಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವ ಶ್ರೀಕೃಷ್ಣನ ಜೀವನ ಧರ್ಮ ಅಮೋಘವಾದದ್ದು ಎಂದು ಪ್ರದಾನಿ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶದ ಜನತೆಗೆ ಶುಭಕೋರಿದ್ದಾರೆ. ಜನ್ಮಾಷ್ಟಮಿ ಸಮಸ್ತ ಭಾರತೀಯರಿಗೆ ಶುಭತರಲಿ ಆಶಿಸಿದ್ದಾರೆ. ಶ್ರೀ ಕೃಷ್ಣನ ಜೀವನ ಹಾಗೂ ಭೋಧನೆ ಸಾರ್ವಕಾಲಿಕ ಅನುಕರಣೀಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ಇನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಟ್ವೀಟ್ ಮಾಡಿ, ಶ್ರೀ ಕ್ರಷ್ಣನ ಬೋಧನೆ ಒಳಗೊಂಡ ಭಗವದ್ಗೀತೆ ಸಮಸ್ತ ಜನತೆಗೆ ದಾರಿದೀಪವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com