ಈ ಸುದ್ದಿಯನ್ನು ಆರ್ಟ್ ಆಫ್ ಲಿವಿಂಗ್ ರಿಟ್ವೀಟ್ ಮಾಡಿದೆ. '' ಮುಜಾಫರ್ ವಾನಿ ಎರಡು ದಿನ ಆಶ್ರಮದಲ್ಲಿದ್ದರು. ಇಂದಿನ ಸ್ಥಿತಿಗತಿ ಬಗ್ಗೆ ಗುರೂಜಿ ಮತ್ತು ವಾನಿ ಚರ್ಚೆ ನಡೆಸಿದ್ದಾರೆ. ಕಾಶ್ಮೀರದ ಜನತೆಯ ನೋವು, ಅಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಕೂಡ ಚರ್ಚೆಸಿದ್ದಾರೆ. ಅವರ ಈ ಭೇಟಿ ಮತ್ತು ಚರ್ಚೆ ಕೇವಲ ವೈಯಕ್ತಿಕ ಮತ್ತು ಮಾನವೀಯ ನೆಲೆಯ ಆಧಾರದಲ್ಲಿತ್ತು'' ಎಂದು ಆಶ್ರಮ ಹೇಳಿಕೆ ನೀಡಿದೆ.