ಭವಾನಿಪಟ್ಟಣ: ಚಲಿಸುತ್ತಿದ್ದ ರೈಲಿನಿಂದ ರೈಲ್ವೆ ರಕ್ಷಣಾ ಪಡೆಯ ಸೈನಿಕನನ್ನು ತಳ್ಳಿದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿರುವ ಘಟನೆ ಒಡಿಸ್ಸಾದ ಕಾಲಹಂಡಿ ಜಿಲ್ಲೆಯಲ್ಲಿ ನಡೆದಿದೆ.
ಕಾಲಹಂಡಿಯ ಗ್ರಾಮದ ಕೊಕ್ಸಾರದ ಭುವನೇಶ್ವರ್ ಠಾಕೂರ್ ಗಾಯಗೊಂಡ ಸೈನಿಕ. ತಿತ್ಲಾಗರ್ ನಿಂಗ ಮುನಿಗುಡಾಗೆ ತೆರಳುತ್ತಿದ್ದ ಅಲೆಪ್ಪಿ ಎಕ್ಸ್ ಪ್ರೆಸ್ ರೈಲಿನಿಂದ ಸೈನಿಕನನ್ನು ತಳ್ಳಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ಗಾಯಗೊಂಡಿರುವ ಭುವನೇಶ್ವರ್ ಠಾಗೂರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಭುವನೇಶ್ವರ್ ಠಾಕೂರ್ ಕಳೆದು ಹೋಗಿದ್ದ ತನ್ನ ಮೊಬೈಲ್ ಅನ್ನು ಹುಡುಕುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ದುಷ್ಕರ್ಮಿಗಳು ಆತನನ್ನು ರೈಲಿನಿಂದ ಕೆಳಗೆ ನೂಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement