ಹೊಸ ಕ್ರಮದ ಬಗ್ಗೆ ಮಾಹಿತಿ ನೀಡಿರುವ ಅಜಯ್ ಭೂಷಣ್ ಪಾಂಡೆ, ಬಯೋಮೆಟ್ರಿಕ್ ದೃಢೀಕರಣ ಸರ್ಕಾರಿ ಅಧಿಕಾರಿಗಳ ಹಾಜರಾತಿಯ ವಿವರಗಳನ್ನೂ ಒಳಗೊಂಡಿರಲಿದ್ದು, ನೋಟು ನಿಷೇಧ, ಕಪ್ಪುಹಣ ತಡೆಗೆ ಕೈಗೊಳ್ಳಲಾಗುವ ಕ್ರಮಗಳಿಗೆ ನೆರವಾಗಲಿದೆ. ಅಷ್ಟೇ ಅಲ್ಲದೇ ಹಣಕಾಸು ಪಾರದರ್ಶಕತೆಗೂ ಸಹಕಾರಿಯಾಗಲಿದೆ ಎಂದು ಭೂಷಣ್ ಪಾಂಡೆ ಹೇಳಿದ್ದಾರೆ.