ಭಾರತಕ್ಕೆ ಬೇಕಿರುವ ಬದಲಾವಣೆಯ ಸೂತ್ರಗಳು ಎಂಬ ವಿಚಾರ ಕುರಿತು ಮಾತನಾಡುತ್ತಿದ್ದ 50ರ ಹರೆಯದ ಕ್ಯಾಮರಾನ್ ಅವರು, ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಸದ್ಯದ ಮೂರು ಟೆಸ್ಟ್ ಪಂದ್ಯಗಳ ಪೈಕಿ ಎರಡರಲ್ಲಿ ಸೋತ್ತಿದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇಂತಹ ದಯನೀಯ ಸ್ಥಿತಿಯಲ್ಲಿರುವ ತಂಡವನ್ನು ನೋಡಿದರೆ ತಂಡದ ಹೆಚ್ಚಿನ ತರಬೇತಿಗಾಗಿ ಸಚಿನ್ ತೆಂಡೂಲ್ಕರ್ ಅವರನ್ನು ಅಪಹರಿಸುವ ಅಗತ್ಯವಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.