ಸಚಿನ್ ತೆಂಡೂಲ್ಕರ್ ಅವರನ್ನು ಅಪಹರಿಸಬೇಕು: ಡೇವಿಡ್ ಕ್ಯಾಮರಾನ್

ಭಾರತೀಯ ಕ್ರಿಕೆಟ್ ರಂಗದ ಜೀವಂತ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಪಹರಿಸಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಬ್ಯಾಟಿಂಗ್ ತರಬೇತಿ...
ಡೇವಿಡ್ ಕ್ಯಾಮರಾನ್
ಡೇವಿಡ್ ಕ್ಯಾಮರಾನ್
ನವದೆಹಲಿ: ಭಾರತೀಯ ಕ್ರಿಕೆಟ್ ರಂಗದ ಜೀವಂತ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಪಹರಿಸಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಬ್ಯಾಟಿಂಗ್ ತರಬೇತಿ ಕೊಡಿಸಬೇಕು ಎಂದು ಬ್ರಿಟಿಷ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರಾನ್ ಹಾಸ್ಯಭರಿತ ಸಲಹೆ ನೀಡಿದ್ದಾರೆ. 
ಭಾರತಕ್ಕೆ ಬೇಕಿರುವ ಬದಲಾವಣೆಯ ಸೂತ್ರಗಳು ಎಂಬ ವಿಚಾರ ಕುರಿತು ಮಾತನಾಡುತ್ತಿದ್ದ 50ರ ಹರೆಯದ ಕ್ಯಾಮರಾನ್ ಅವರು, ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಸದ್ಯದ ಮೂರು ಟೆಸ್ಟ್ ಪಂದ್ಯಗಳ ಪೈಕಿ ಎರಡರಲ್ಲಿ ಸೋತ್ತಿದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇಂತಹ ದಯನೀಯ ಸ್ಥಿತಿಯಲ್ಲಿರುವ ತಂಡವನ್ನು ನೋಡಿದರೆ ತಂಡದ ಹೆಚ್ಚಿನ ತರಬೇತಿಗಾಗಿ ಸಚಿನ್ ತೆಂಡೂಲ್ಕರ್ ಅವರನ್ನು ಅಪಹರಿಸುವ ಅಗತ್ಯವಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. 
ನಾನು ಪ್ರತಿ ಸಾರಿ ಭಾರತಕ್ಕೆ ಬಂದಾಗಲೆಲ್ಲಾ ಇಲ್ಲಿನ ಅಭಿವೃದ್ಧಿ ಮತ್ತು ಸಾಮರ್ಥ್ಯವನ್ನು ಕಾಣುತ್ತೇನೆ. ಭಾರತದೊಂದಿಗೆ ಇಂಗ್ಲೆಂಡ್ ಹೊಂದಿರುವ ಐತಿಹಾಸಿಕ ಬಾಂಧವ್ಯವನ್ನು ಇದೇ ವೇಳೆ ಕ್ಯಾಮರಾನ್ ಹೊಗಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com