ಜಯಲಲಿತಾ ಭೇಟಿ ನಂತರ ಪ್ರಸಿದ್ಧಿ ಪಡೆಯಿತು ಈ ದೇವಾಲಯ

ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ 2001ರ ಜುಲೈನಲ್ಲಿ ಮಲ್ಲಪ್ಪುರಂನಲ್ಲಿರುವ ತಿರೂರ್...
ಜಯಲಲಿತಾ
ಜಯಲಲಿತಾ

ಕೋಜಿಕೋಡ್: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ 2001ರ ಜುಲೈನಲ್ಲಿ ಮಲ್ಲಪ್ಪುರಂನಲ್ಲಿರುವ ತಿರೂರ್ ಸಮೀಪದ ಅಲತಿಯೂರ್ ದೇವಾಲಕ್ಕೆ ಭೇಟಿ ನೀಡಿದ್ದರು. ಜಯಲಲಿತಾ ಭೇಟಿ ನೀಡಿದ ನಂತರ, ದಕ್ಷಿಣ ಭಾರತದ ಪ್ರಮುಖ ದೇವಾಲಯಗಳ ಪಟ್ಟಿಗೆ ಶ್ರೀ ಅಲತಿಯೂರ್ ಪೆರುಂತಿರಿಕೊವಿಲ್ ದೇವಾಲಯವು ಸೇರಿತು ಎಂದು ದೇವಾಲಯದ ಕಾರ್ಯಕಾರಿ ಅಧಿಕಾರಿ ಮನೆಜ್ ಕುಮಾರ್ ಹೇಳಿದ್ದಾರೆ.

ಜಯಲಲಿತಾ ಭೇಟಿ ನಂತರ ವಾರದಲ್ಲಿ ಸುಮಾರು 4 ಸಾವಿರ ಭಕ್ತಾಧಿಗಳು ಬಂದು ಹೋಗುತ್ತಿದ್ದಾರೆ. ರಾಜಕಾರಣಿಗಳು, ಸಚಿವರು, ಕಲಾವಿದರು ಸೇರಿದಂತೆ ದೇಶದ ಹಲವು ಭಾಗಗಳ ವಿಐಪಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಜಯಲಲಿತಾ ನಂತರ 2003 ರಲ್ಲಿ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೂಡ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಜ್ಯೋತಿಷಿ ಪರಪ್ಪನಂಗಡಿ ಉನ್ನಿಕೃಷ್ಣನ್ ಅವರ ಸಲಹೆ ಮೇರೆಗೆ ಜಯಲಲಿತಾ ಈ ದೇವಾಲಯಕ್ಕೆ ಭೇಟಿ ನೀಡಿದ್ದರು.

ದೇವಾಸ್ಥಾನದಲ್ಲಿರುವ ಹನುಮನ ಮೂರ್ತಿಗೆ ಜಯಲಲಿತಾ ಚಿನ್ನದ ಕಿರೀಟ ಹಾಗೂ ಆಭರಣ ಸಮರ್ಪಿಸಿದ್ದರು. ಜೊತೆಗೆ ದೇವಾಲಯಕ್ಕೆ 1 ಲಕ್ಷ ರು ಅನುದಾನ ಕೂಡ ನೀಡಿದ್ದರು. ಭದ್ರತಾ ದೃಷ್ಟಿಯಿಂದ ಆಭರಣ ಮತ್ತು ಚಿನ್ನದ ಕಿರೀಟವನ್ನು ಲಾಕರ್ ನಲ್ಲಿಡಲಾಗಿದೆ.ಹಬ್ಬದ ಸಮಯಗಳಲ್ಲಿ ಮಾತ್ರ ಇವುಗಳನ್ನು ಹೊರತೆಗೆಯಲಾಗುತ್ತದೆ. ಜಯಲಲಿತಾ ಅನಾರೋಗ್ಯದಿಂದಾಗಿ ಸೆಪ್ಚಂಬರ್ ನಲ್ಲಿ ಆಸ್ಪತ್ರೆ ಸೇರಿದ ಮೇಲೆ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಈ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com