ಚಂದ್ರಬಾಬು ನಾಯ್ಡು ವೋಟಿಗಾಗಿ ನೋಟು ಹಗರಣದಲ್ಲಿ ಸಿಲುಕಿಕೊಂಡಿದ್ದು, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಒಡೆತನದ ಸ್ಥಳೀಯ ಸುದ್ದಿವಾಹಿನಿಯೊಂದು ನಾಯ್ಡು, ವೋಟಿಗಾಗಿ ನೋಟು ಹಗರಣದಲ್ಲಿ ಪಾತ್ರ ವಹಿಸಿರುವ ಕುರಿತು ಆಡಿಯೋ ಟೇಪ್' ಒಂದನ್ನ ಪ್ರಸಾರ ಮಾಡಿತ್ತು. ಆಂಗ್ಲೋ ಇಂಡಿಯನ್ ಸದಸ್ಯರಿಗೆ ಲಂಚದ ಆಮಿಶವೊಡ್ಡುತ್ತಿದ್ದಾಗ ಬಂಧನಕ್ಕೀಡಾದ ಟಿಡಿಪಿ ಎಂಎಲ್'ಎ ರೇಂವತ್ ರೆಡ್ಡಿ ಜೊತೆ ನಾಯ್ಡು ನಡೆಸಿರುವ ದೂರವಾಣಿ ಸಂಭಾಷಣೆ ಇದರಲ್ಲಿದೆ. ಆದರೆ, ಅದರಲ್ಲಿರುವ ಆಡಿಯೋ ನನ್ನದಲ್ಲ ಎಂದಿರುವ ಚಂದ್ರಬಾಬುನಾಯ್ಡು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.