ನೋಟು ನಿಷೇಧದ ಕ್ರಮವನ್ನು ಪೊಖ್ರಾನ್ ಅಣು ಪರೀಕ್ಷೆಯಂತಹ ಕಠಿಣ ನಿರ್ಧಾರಕ್ಕೆ ಹೋಲಿಕೆ ಮಾಡಿರುವ ಗುರುಮೂರ್ತಿ, ಪೊಖ್ರಾನ್ ಅಣು ಪರೀಕ್ಷೆ ನಡೆಸಿದಾಗ ಇಡೀ ಜಗತ್ತೇ ಭಾರತದ ಬಗ್ಗೆ ಅಚ್ಚರಿಗೊಂಡಿತ್ತು. ಪರಿಣಾಮ ಊಹೆಗೂ ಮೀರಿದ ಬದಲಾವಣೆಗಳು ನಡೆದಿದ್ದವು, ಈಗ ನೋಟು ನಿಷೇಧದಿಂದಲೂ ಊಹೆಗೂ ಮೀರಿದ ಬದಲಾವಣೆಗಳು ಸಂಭವಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.