ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದ ವಿರೋಧ ಪಕ್ಷಗಳ ಪ್ರತಿಭಟನೆಯನ್ನು ಕಲಾಪ ಕಾಣುತ್ತಾ ಬಂದಿದೆ. ನೋಟುಗಳ ಅಪಮೌಲ್ಯ ಯೋಜನೆಯನ್ನು ಸರಿಯಾದ ಕ್ರಮದಲ್ಲಿ ಸರ್ಕಾರ ಜಾರಿಗೆ ತಂದಿಲ್ಲ ಎನ್ನುತ್ತಿವೆ. ದೇಶದ ಬಡಜನರಿಗೆ, ರೈತರಿಗೆ ತೊಂದರೆಯಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಕೂಗು. ಇದರಿಂದ ಸಂಸತ್ತಿನ ಎರಡೂ ಸದನಗಳಲ್ಲಿ ಯಾವುದೇ ಮಹತ್ವದ ಚರ್ಚೆ, ನಿರ್ಣಯಗಳು ಆಗಿಲ್ಲ. ಇಷ್ಟು ದಿನದ ಕಲಾಪಗಳು ಬರೀ ನೋಟುಗಳ ನಿಷೇಧ ವಿಷಯವೇ ನುಂಗಿಹಾಕಿದೆ. ಈ ತಿಂಗಳ 23ರಂದು ಚಳಿಗಾಲ ಅಧಿವೇಶನ ಮುಕ್ತಾಯಗೊಳ್ಳಲಿದೆ.