ನಮಕ್ಕಲ್/ ಚೆನ್ನೈ: ಗಂಟಲು ಮತ್ತು ಶ್ವಾಸಕೋಶ ತೊಂದರೆಯಿಂದ ಉಸಿರಾಟದ ಸಮಸ್ಯೆಯನ್ನು ಬಳಲುತ್ತಿರುವ ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪುತ್ರ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.
ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕರುಣಾನಿಧಿಯವರು ಆರೋಗ್ಯದಲ್ಲಿ ಸುಧಾರಿಸಿಕೊಳ್ಳುತ್ತಿದ್ದು ಗಾಬರಿಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಸ್ಟಾಲಿನ್ ನಮಕ್ಕಲ್ ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಉಸಿರಾಟದ ತೊಂದರೆಯಿಂದ ಕರುಣಾನಿಧಿಯವರು ಮೊನ್ನೆ 15ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಶ್ವಾಸಕೋಶ ಮತ್ತು ಗಂಟಲು ಸೋಂಕಿಗೆ ತುತ್ತಾಗಿರುವ ಕರುಣಾನಿಧಿ ಶ್ವಾಸನಾಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.