ವಿಜಯವಾಡ: 500, 1000 ರೂ ನೋಟು ನಿಷೇಧ ಮಾಡುವಂತೆ ಪದೇ ಪದೇ ಪ್ರಧಾನಿಗೆ ಪತ್ರ ಬರೆದಿದ್ದ ಬಿಜೆಪಿ ಮಿತ್ರ ಪಕ್ಷ ತೆಲುಗು ದೇಶಂ ಪಕ್ಷದ ನಾಯಕ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಈಗ ನೋಟು ನಿಷೇಧದ ವಿಚಾರವಾಗಿ ಪ್ರತಿದಿನವೂ ತಲೆ ಚಚ್ಕೋತಾ ಇದ್ದಾರಂತೆ!. ಹೀಗಂತಾ ಸ್ವತಃ ಚಂದ್ರಬಾಬು ನಾಯ್ಡು ಅವರೇ ಪಕ್ಷದ ಶಾಸಕರು, ಸಂಸದರ ಸಮ್ಮುಖದಲ್ಲಿ ಹೇಳಿದ್ದಾರೆ.