ಚೆನ್ನೈನ ಶೇಶಾದ್ರಿ ಬಾಲಾ ವಿದ್ಯಾಭವನ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಆರ್.ಎಸ್.ಸುಶ್ಮಿತಾ, ಬೋರ್ಡ್ ಪರೀಕ್ಷೆಯನ್ನು ಮತ್ತೆ ಜಾರಿಗೆ ತರುತ್ತಿರುವುದು ಖುಷಿಯ ವಿಚಾರ. ನಮ್ಮ ಶಾಲೆಯಲ್ಲಿ ಸಿಸಿಇ ತುಂಬಾ ಕಷ್ಟವಾಗಿರುತ್ತದೆ. ಬೋರ್ಡ್ ಪರೀಕ್ಷೆ ವಿದ್ಯಾರ್ಥಿಗಳಿಗೆ ಸುಲಭವಾಗುತ್ತದೆ ಎನ್ನುತ್ತಾಳೆ. ಇನ್ನು ತ್ರಿಭಾಷಾ ಸೂತ್ರ ಜಾರಿಗೆ ತಂದರೆ ಹಿಂದಿ ಭಾಷೆ ಇರುವುದು ಉತ್ತಮ. ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಮತ್ತೆ ಜಾರಿಗೆ ತಂದರೆ ಯಾವುದೇ ಉದ್ದೇಶ ಈಡೇರುವುದಿಲ್ಲ ಎನ್ನುತ್ತಾಳೆ.