ಕ್ಷಿಪ್ರ ಪ್ರಿತಿಕ್ರಿಯೆಯಿಂದಾಗಿ ಮಹಾ ದುರಂತವನ್ನು ತಪ್ಪಿಸಲಾಯಿತು ಎಂದು ನೌಕಾಪಡೆ ತಿಳಿಸಿದೆ.
ಪ್ರಯಾಣಿಕರನ್ನು ಹೊರತೆಗೆಯುವಾಗ ಹಠಾತ್ತನೆ ವಿಮಾನ ಮುಂದಕ್ಕೆ ಬಾಗಿತು. ಇದರಿಂದ ಪ್ರಯಾಣಿಕರಲ್ಲಿ ಆತಂಕ, ಭಯ ಉಂಟಾಗಿತ್ತು. ಜೆಟ್ ಏರ್ ವೇಸ್ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳು ಒಟ್ಟು ಸೇರಿ ಪ್ರಯಾಣಿಕರನ್ನು ವಿಮಾನದಿಂದ ಹೊರತೆಗೆಯುವಲ್ಲಿ ಮತ್ತು ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.
ದುಬೈಯಿಂದ ಬಂದ 9 ಡಬ್ಲ್ಯು 2374 ವಿಮಾನ ಮುಂಬೈಗೆ ಹೊರಟು ರನ್ ವೇಯಲ್ಲಿ ಹೋಗುತ್ತಿದ್ದಾಗ ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ದುರಂತ ನಡೆದಿದೆ.
ಐಎನ್ಎಸ್ ಹಂಸ ವಾಸ್ಕೊ ಪಟ್ಟಣದಲ್ಲಿದ್ದು ಇದು ಇರುವುದು ಗೋವಾದಿಂದ 25 ಕಿಲೋ ಮೀಟರ್ ದೂರದಲ್ಲಿ.
ರಕ್ಷಣಾ ಕಾರ್ಯದ ಹೊತ್ತಿನಲ್ಲಿ ಗೋವಾ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ವಿಮಾನವನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತು ಒಮನ್ ಏರ್ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಏಳು ವಿಮಾನಗಳನ್ನು ರದ್ದುಪಡಿಸಲಾಯಿತು. ಮತ್ತೆರಡು ವಿಮಾನಗಳು ನಿಗದಿತ ವೇಳೆಗೆ ಹಾರಾಟ ನಡೆಸಲಿಲ್ಲ.