ಪಕ್ಷಕ್ಕೆ ಬಂದಿರುವ ಬಹುತೇಕ ದೇಣಿಗೆ ಬಂದಿರುವುದು ಬ್ಯಾಂಕಿಂಗ್ ವ್ಯವಸ್ಥೆಯಿಂದ ಆಗಿದ್ದು, ದೇಶದಲ್ಲಿ ನಗದು ರಹಿತ ಪಕ್ಷವಾಗಿರುವ ಏಕೈಕ ಪಕ್ಷವೆಂದರೆ ಅದು ಆಮ್ ಆದ್ಮಿ ಪಕ್ಷವಾಗಿದೆ ಎಂದು ಆಪ್ ನಾಯಕ ದಿಲೀಪ್ ಪಾಂಡೇ ಹೇಳಿದ್ದಾರೆ. ದೇಣಿಗೆ ವಿಷಯದಲ್ಲಿ ಬಿಜೆಪಿ ಆಮ್ ಆದ್ಮಿ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಬಿಜೆಪಿ ಕಳೆದ ಮೂರು ವರ್ಷಗಳಿಂದ ಇದೇ ತಂತ್ರ ರೂಪಿಸುತ್ತಿದೆ ಎಂದು ದಿಲೀಪ್ ಪಾಂಡೇ ಆರೋಪಿಸಿದ್ದಾರೆ.