ನಿವೃತ್ತಿಯಾಗುವುದಕ್ಕೂ ಕೆಲವೇ ದಿನಗಳ ಮುನ್ನ ಅರೂಪ್ ರಹಾ ಪತ್ರಿಕಾಗೋಷ್ಠಿ ನಡೆಸಿದ್ದು, ದೇಶದ ಕಾನೂನನ್ನು ಎಲ್ಲರೂ ಪಾಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸೇನೆಯ ಯಾವುದೇ ವಿಭಾಗದ ಮುಖ್ಯಸ್ಥರಾಗಿದ್ದವರು ಈ ವರೆಗೂ ಭ್ರಷ್ಟಾಚಾರದ ಆರೋಪದಲ್ಲಿ ಬಂಧನಕ್ಕೊಳಗಾಗಿರಲಿಲ್ಲ. ಬಂಧನಕ್ಕೊಳಗಾಗಿರುವ ಮೊದಲ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿಯಾಗಿದ್ದು, ಒಂದು ವೇಳೆ ತ್ಯಾಗಿಯ ವಿರುದ್ಧ ಆರೋಪ ಸಾಬೀತಾದರೆ ಸೇನಾ ಪಡೆಗೆ ಅದು ಕೆಟ್ಟ ಹೆಸರು ತರಲಿದೆ ಎಂದು ಅರೂಪ್ ರಹಾ ತಿಳಿಸಿದ್ದಾರೆ.