ಅಂದಿನಿಂದ ಜಾನಕಿನಾಥ್ ಆ ಗ್ರಾಮದ ಇತರೆ 5 ಸಾವಿರ ಮುಸ್ಲಿಮರೊಂದಿಗೆ ಬದುಕುತ್ತಿದ್ದರು. ಕಳೆದ 5 ವರ್ಷಗಳಿಂದ ಕಾಯಿಲೆ ಬಿದ್ದಿದ್ದ ಅವರನ್ನು ನೆರೆಹೊರೆಯ ಮುಸ್ಲಿಮರೇ ನೋಡಿಕೊಳ್ಳುತ್ತಿದ್ದರು. ಅವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ, ಊರಿಗೆ ಊರೇ ಜಾನಕಿನಾಥ್ ಮನೆ ಮುಂದೆ ಸೇರಿತ್ತು. ನಂತರ, ಮುಸ್ಲಿಮರೇ ಸೇರಿ ಅಂತ್ಯ ಸಂಸ್ಕಾರಕ್ಕೆ ಕಟ್ಟಿಗೆ ತಂದು, ಅಂತ್ಯಕ್ರಿಯೆ ಪೂರೈಸಿದರು.