ಎಜೆಎಲ್ ಅನ್ನು ವೈಐಎಲ್ ಕಂಪನಿ ಖರೀದಿ ಮಾಡಿದ್ದರಲ್ಲಿ ವ್ಯಾಪಕ ಅವ್ಯವಹಾರವಾಗಿದೆ ಎಂದು ಮೊದಲು ಆರೋಪಿಸಿದ್ದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ. ಈ ಬಗ್ಗೆ ಅವರು 2012ರಲ್ಲಿ ದೆಹಲಿಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಎಜೆಎಲ್ ಅನ್ನು ಖರೀದಿಸುವ ವೇಳೆ ವೈಐಎಲ್ ಕಂಪನಿ ಎಜೆಎಲ್ ಜೊತೆಗೆ ಕಾಂಗ್ರೆಸ್ ಪಕ್ಷದಿಂದ 90 ಕೋಟಿ ರು. ಬಡ್ಡಿ ರಹಿತ ಸಾಲ ಪಡೆದುಕೊಂಡಿದೆ. ಆದಾಯ ತೆರಿಗೆ ಕಾನೂನು ಪ್ರಕಾರ, ರಾಜಕೀಯ ಪಕ್ಷವೊಂದು ಮೂರನೇ ಕಂಪನಿಗೆ ಸಾಲ ಕೊಡುವಂತಿಲ್ಲ. ಇಂತಿರ್ಪ ಎಜೆಎಲ್, ಐಎಎಲ್ ಮಧ್ಯೆ ಹಣದ ಅವ್ಯವಹಾರ ನಡೆದಿದೆ. ಎಜೆಎಲ್ಗೆ 90 ಕೋಟಿ ರೂ. ಸಾಲ ಕೊಡಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಮೊದಲು ಹೇಳಿದ್ದು, ಬಳಿಕ ಅದೇ ಎಜೆಎಲ್ ವೈಐಎಲ್ ಕಂಪನಿಗೆ ಸಾಲವಾಗಿ 50 ಲಕ್ಷ ರೂ. ನೀಡಿದ್ದಾಗಿ ಹೇಳಲಾಗಿದೆ. ಎಜೆಎಲ್ ಬಳಿ ದೆಹಲಿ, ಲಖನೌ ಮುಂತಾದೆಡೆ ಆಸ್ತಿ ಇದ್ದು ದೆಹಲಿಯಲ್ಲಿ ಪ್ರಮುಖ ಸ್ಥಳದಲ್ಲಿ ಕಟ್ಟಡವೂ ಇದೆ. ಅಲ್ಲದೇ ಎಜೆಎಲ್ ಬಳಿ 2 ಸಾವಿರ ಕೋಟಿ ರೂ.ಗಳ ರಿಯಲ್ ಎಸ್ಟೇಟ್ ಆಸ್ತಿ ಇತ್ತು. ಇದನ್ನು ವೈಐಎಲ್ ಕಂಪನಿ ಬಳಿಕ ತನ್ನ ಸ್ವಾಧೀನಕ್ಕೆ ಪಡೆದಿದೆ. ಇದನ್ನು ಪಡೆಯುವ ವೇಳೆ ಎಜೆಎಲ್ಗೆ ಕೇವಲ 90 ಕೋಟಿ ರು. ಪಾವತಿಸಿದ್ದಾಗಿ ಹೇಳಲಾಗಿದೆ.