ರಾಜ್ಯಪಾಲರ ಪರ ಹಿರಿಯ ವಕೀಲ ಟಿಆರ್ ಅಂದ್ಯಾರುಜಿನ ಅವರು ಮಾತನಾಡಿ, ಮುಖ್ಯಮಂತ್ರಿ ನಬಂ ತೂಕಿ ರಾಜ್ಯಪಾಲರನ್ನು ಭೇಟಿ ಮಾಡಲು ಹೋದಾಗ ಅವರೊಂದಿಗೆ ಆಗಮಿಸಿದ್ದ ಕೆಲ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ನಿಂದಿಸಿದ್ದಾರೆ. ಅಲ್ಲದೇ, ಕೆಲ ಸಂಪುಟದ ಸದಸ್ಯರು ರಾಜ್ಯಪಾಲರ ಮೇಲೆ ದೈಹಿಕ ಹಲ್ಲೆ ಮಾಡಿ, ವಿಧಾನಸಭೆಗೆ ಬೀಗ ಹಾಕಿದ್ದಾರೆ. ಇದೆಂತಾ ಪ್ರಜಾಪ್ರಭುತ್ವ, ಒಬ್ಬ ರಾಜ್ಯಪಾಲನ ಮೇಲೆ ದೌರ್ಜನ್ಯ ಮಾಡುವುದು ಸರಿಯೇ? ಈ ರೀತಿ ಎಲ್ಲಿಯೂ ನಡೆಯಬಾರದು ಎಂದು ಹೇಳಿದ್ದಾರೆ.