ಕುರುಪ್ ಕೇರಳದ ಪ್ರಮುಖ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು, ಇವರು ಸಾಕಷ್ಟು ಕವನ ಸಂಕಲನಗಳನ್ನು ಹೊರತಂದಿದ್ದಾರೆ ಮತ್ತು ಕೆಲವು ಚಿತ್ರಗಳಿಗೂ ಸಹ ಗೀತ ರಚನೆ ಮಾಡಿದ್ದಾರೆ.
ಕುರುಪ್ ಅವರಿಗೆ ಕೇಂದ್ರ ಸರ್ಕಾರ 1998ರಲ್ಲಿ ಪದ್ಮಶ್ರೀ ಮತ್ತು 2011ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 2007ರಲ್ಲಿ ಇವರಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿತ್ತು.