ಭೂಗತ ಪಾತಕಿ ರವಿ ಪೂಜಾರಿಯಿಂದ ಹುರಿಯತ್ ನಾಯಕ ಸಯೀದ್ ಅಲಿ ಗಿಲಾನಿಗೆ ಕೊಲೆ ಬೆದರಿಕೆ

ಭೂಗತ ಪಾತಕಿ ರವಿ ಪೂಜಾರಿ ಸರ್ವಪಕ್ಷಗಳ ಹುರಿಯತ್ ಕಾನ್ಫೆರೆನ್ಸ್ ಅಧ್ಯಕ್ಷ ಸಯೀದ್ ಅಲಿ ಗೀಲಾನಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ...
ರವಿ ಪೂಜಾರಿ
ರವಿ ಪೂಜಾರಿ
ಶ್ರೀನಗರ: ಭೂಗತ ಪಾತಕಿ ರವಿ ಪೂಜಾರಿ ಸರ್ವಪಕ್ಷಗಳ ಹುರಿಯತ್ ಕಾನ್ಫೆರೆನ್ಸ್ ಅಧ್ಯಕ್ಷ ಸಯೀದ್ ಅಲಿ ಗೀಲಾನಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ಭಾನುವಾರ ಮಾಧ್ಯಮಗಳು ವರದಿ ಮಾಡಿವೆ.
ಶ್ರೀನಗರದ ಹೈದರಾಪುರ ಪ್ರದೇಶದಲ್ಲಿರುವ ಹುರಿಯತ್ ಕಚೇರಿಯ ಸ್ಥಿರ ದೂರವಾಣಿಗೆ ಕರೆ ಮಾಡಿದ ಪೂಜಾರಿ, ಗೀಲಾನಿಯನ್ನು ಹತ್ಯೆ ಮಾಡುವುದಾಗಿ ಹುರಿಯತ್ ಕಾನ್ಫೆರೆನ್ಸ್ ವಕ್ತಾರ ಅಯಾಜ್ ಅಕ್ಬರ್ ಹೇಳಿರುವುದಾಗಿ ಪಾಕಿಸ್ತಾನ ದಿನ ಪತ್ರಿಕೆ ದಿ ನೇಷನ್ ವರದಿ ಮಾಡಿದೆ.
ದೂರವಾಣಿ ಮೂಲಕ ಬೆದರಿಕೆ ಹಾಕಿದ ಭೂಗತ ಪಾತಕಿಯ ಭಾಷಣೆ ಅನಾಗರಕಿ ಮತ್ತು ತುಂಬಾ ಕೀಳುಮಟ್ಟದ್ದಾಗಿತ್ತು ಎಂದು ಅಕ್ಬರ್ ಹೇಳಿದ್ದಾರೆ. ಅಲ್ಲದೆ ಈ ಬೆದರಿಕೆಗಳಿಗೆ ಬಗ್ಗದೆ ಗೀಲಾನಿ ಅವರು ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಭೂಗತ ಪಾತಿಕ ಗೀಲಾನಿಗೆ ಜೀವ ಬೆದರಿಕೆ ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ರವಿ ಪೂಜಾರಿ ಪರೋಕ್ಷವಾಗಿ ಭಾರತ ಸರ್ಕಾರಕ್ಕೆ ಮತ್ತು ಕೋಮುವಾದಿಗಳನ್ನು ಬೆಂಬಲಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಅಕ್ಬರ್ ಹೇಳಿರುವುದಾಗಿ ವರದಿ ಮಾಡಲಾಗಿದೆ.
ಒಂದು ವೇಳೆ ಹುರಿಯತ್ ಅಧ್ಯಕ್ಷರ ಜೀವಕ್ಕೆ ಧಕ್ಕೆಯಾದರೆ ಅದಕ್ಕೆ ಭಾರತ ಸರ್ಕಾರವೇ ನೇರ ಹೊಣೆ ಎಂದು ಸಹ ಅಕ್ಬರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com