ಕನಯ್ಯಾ ಕುಮಾರ್ ತಪ್ಪಾಗಿ ಏನೂ ಹೇಳಲಿಲ್ಲ: ಶತ್ರುಘ್ನ ಸಿನ್ಹಾ

ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರನ್ನು ಬಂಧಿಸಿರುವ ಬಗ್ಗೆ ಬಿಜೆಪಿ ನಾಯಕ...
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ
Updated on
ಮುಂಬೈ: ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರನ್ನು ಬಂಧಿಸಿರುವ ಬಗ್ಗೆ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಮಾಡಿದ ಟ್ವೀಟ್ ಈಗ ಚರ್ಚಾಸ್ಪದವಾಗಿದೆ.
ಬುಧವಾರ ಈ ಬಗ್ಗೆ ಟ್ವೀಟ್ ಮಾಡಿದ ಸಿನ್ಹಾ, ನಮ್ಮ ಬಿಹಾರದ ಹುಡುಗ ಜೆಎನ್‌ಯು ಎಸ್‌ಯು ಅಧ್ಯಕ್ಷ ಕನಯ್ಯಾ ಅವರ ಭಾಷಣವನ್ನು ನಾನು ಕೇಳಿದ್ದೇನೆ. ಆತ ದೇಶ ವಿರೋಧಿ ಅಥವಾ ಅಸಂವಿಧಾನಿಕವಾದ ಮಾತುಗಳನ್ನು ಯಾವುದೂ ಹೇಳಲಿಲ್ಲ ಎಂದಿದ್ದಾರೆ.
ಈ ಟ್ವೀಟ್‌ನ ಬೆನ್ನಲ್ಲೇ,  ಆತ ಆದಷ್ಟು ಬೇಗ ಬಂಧ ಮುಕ್ತನಾಗಲಿ. ಆತ ಬೇಗನೆ ಬಂಧಮುಕ್ತನಾಗಲೆಂದು ನಾನು ಆಶಿಸುತ್ತೇನೆ ಎಂಬ ಟ್ವೀಟ್‌ನ್ನೂ ಸಿನ್ಹಾ ಮಾಡಿದ್ದಾರೆ. 
ಪೊಲೀಸ್ ಬಂಧನದಲ್ಲಿರುವ ಕನಯ್ಯಾ ಅವರನ್ನು ಬುಧವಾರ ದೆಹಲಿ ಹೈಕೋರ್ಟ್‌ಗೆ ಹಾಜರು ಪಡಿಸಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com