ಆತ್ಮಹತ್ಯೆ
ಆತ್ಮಹತ್ಯೆ

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ

ತನ್ನದೇ ಸರ್ವೀಸ್ ರಿವಾಲ್ವರ್ ನಲ್ಲಿ ಗುಂಡಿಕ್ಕಿಕೊಂಡು ಕೇಂದ್ರೀಯ ಅಬಕಾರಿ ಅಧೀಕ್ಷಕ 48 ವರ್ಷದ ರವೀಂದ್ರ ಫಡ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ...

ಮುಂಬೈ: ತನ್ನದೇ ಸರ್ವೀಸ್ ರಿವಾಲ್ವರ್ ನಲ್ಲಿ ಗುಂಡಿಕ್ಕಿಕೊಂಡು ಕೇಂದ್ರೀಯ ಅಬಕಾರಿ ಅಧೀಕ್ಷಕ 48 ವರ್ಷದ ರವೀಂದ್ರ ಫಡ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪಶ್ಚಿಮ ಮಲಾಡ್ ನ ನಹಾರ್ ನಗರದ ನಿವಾಸಿಯಾಗಿದ್ದ ರವೀಂದ್ರ ಫಡ್ಕೆ ಶೂಟ್ ಮಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರವೀಂದ್ರ ಫಡ್ಕೆ ಅವರು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಜೀವನದಲ್ಲಿ ಉಂಟಾದ ಜಿಗುಪ್ಸೆಯೇ ನನ್ನ ಸಾವಿಗೆ ಕಾರಣ ಎಂಬುವುದಾಗಿ ತಿಳಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

Related Stories

No stories found.

Advertisement

X
Kannada Prabha
www.kannadaprabha.com