ಪ್ರತಿಭಟನಾನಿರತರು ಸಚಿವರ ಕಾರಿಗೆ ಕಿಚ್ಚಿಟ್ಟಿದ್ದು, ಇದೀಗ ದೆಹಲಿಯ ಸಮೀಪದಲ್ಲಿರುವ ಫರೀದಾಬಾದ್ಗೂ ಪ್ರತಿಭಟನೆ ವ್ಯಾಪಿಸಿದೆ. ರೋಹ್ತಕ್, ಬಿವಾನಿ ಮೊದಲಾದ ಸ್ಥಳಗಳಲ್ಲಿ ಪ್ರತಿಭಟನೆಯ ಕಿಚ್ಚು ತೀವ್ರವಾಗಿದ್ದರಿಂದ ಅಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಈ ಪ್ರದೇಶಗಳಲ್ಲಿ ಎಸ್ಸೆಮ್ಮೆಸ್ಸ್, ಇಂಟರ್ನೆಟ್ ಸೇವೆಗಳನ್ನು ಸರ್ಕಾರ ಅನಿಶ್ಚಿತ ಕಾಲದ ವರಗೆ ನಿಷೇಧಿಸಿದೆ.