ಗಾಂಧಿಜೀಗೆ 'ಮಹಾತ್ಮ' ಎಂಬ ಬಿರುದು ಕೊಟ್ಟಿದ್ದು ರವೀಂದ್ರನಾಥ್ ಠಾಗೂರ್ : ಗುಜರಾತ್ ಹೈಕೋರ್ಟ್
ಅಹಮದಾಬಾದ್ : ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಮಹಾತ್ಮ ಎಂಬ ಬಿರುದು ಕೊಟ್ಟಿದ್ದು ರವೀಂದ್ರ ನಾಥ್ ಠಾಗೂರ್ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ರಾಜ್ಕೋಟ್ನಲ್ಲಿ ನಡೆದ ಪ್ರವೇಶ ಪರೀಕ್ಷೆಯೊಂದರ ಪ್ರಶ್ನೆಪತ್ರಿಕೆಯಲ್ಲಿ ಗಾಂಧಿಜೀಯವರಿಗೆ ಮಹಾತ್ಮ ಬಿರುದಿನ ಬಗ್ಗೆ ಉಂಟಾಗಿದ್ದ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರೇ ಮೋಹನದಾಸ ಕರಮಚಂದ್ರ ಗಾಂಧಿಜೀಗೆ ಮಹಾತ್ಮ ಪಟ್ಟ ನೀಡಿದ್ದು ಎಂದು ಗುಜರಾತ್ ಹೈಕೋರ್ಟ್ ಇಂದು ಘೋಷಿಸಿದೆ.
ಈ ವಿವಾದ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿ ಇತ್ಯರ್ಥಗೊಳಿಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರು, ರಾಜ್ಕೋಟ್ ಜಿಲ್ಲಾ ಪಂಚಾಯತ್ ಶಿಕ್ಷಣ ಸಂಸ್ಥೆ ಸೃಷ್ಟಿಸಿದ್ದ ಈ ವಿವಾದದ ಬಗ್ಗೆ ಜನ ತಲೆ ಕೆಡಿಸಿಕೊಳ್ಳಬಾರದು, ಗಾಂಧಿಜೀಗೆ ಮಹಾತ್ಮ ಬಿರುದು ನೀಡಿದ ಹೆಗ್ಗಳಿಕೆ ಕವಿ ರವೀಂದ್ರನಾಥ ಟ್ಯಾಗೋರರಿಗೆ ಸಲ್ಲುತ್ತದೆ ಎಂದು ಸ್ಪಷ್ಟ ಪಡಿಸಿದೆ.
ಸಂಧ್ಯಾ ಮರು ಎಂಬುವವರು ತಮ್ಮ ಪರೀಕ್ಷೆಯಲ್ಲಿ ಈ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಾಗದೇ ಅಂಕ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಗುಜರಾತ್ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ