ಲಾಹೋರ್: ಜಾಟ್ ಪ್ರತಿಭಟನೆಯಿಂದ ರದ್ದುಗೊಂಡಿದ್ದ ಭಾರತ-ಪಾಕಿಸ್ತಾನ ನಡುವಿನ ಬಸ್ ಸಂಚಾರ ಪುನಃ ಪ್ರಾರಂಭವಾಗಿದೆ.
ವಾಘಾ ಗಡಿ ಮೂಲಕ ನವದೆಹಲಿಯಿಂದ ಲಾಹೋರ್ ಗೆ ಬಸ್ ಸಂಚಾರ ಪ್ರಾರಂಭವಾಗಿದ್ದು 21 ಜನ ಪ್ರಯಾಣಿಕರು ಪಾಕಿಸ್ತಾನಕ್ಕೆ ತೆರಳಿದ್ದಾರೆ ಎಂದು ನ್ಯೂಸ್ ಇಂಟರ್ ನ್ಯಾಷನಲ್ ವರದಿ ಮಾಡಿದೆ.
ಹರ್ಯಾಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪಾಕಿಸ್ತಾನ- ಭಾರತ ನಡುವಿನ ರೈಲು, ಬಸ್ ಸಂಚಾರ ಸಂಚಾರ ಸ್ಥಬ್ಧಗೊಂಡಿತ್ತು. ಮೀಸಲಾತಿಗೆ ಆಗ್ರಹಿಸಿ ಹರ್ಯಾಣದಲ್ಲಿ ಜಾಟ್ ಸಮುದಾಯದವರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
Advertisement
Advertisement